ವಿವೇಕಾನಂದ ಕಾಮತ್ ಸಾಹಿತ್ಯ ಕೃಷಿ : 1996ರಲ್ಲಿ ಬರವಣಿಗೆ ಆರಂಭ. ಇದುವರೆಗೂ 150 ಕ್ಕೂ ಹೆಚ್ಚು ಕತೆಗಳು ಪ್ರಕಟವಾಗಿವೆ. ಆದರೆ ಕಾದಂಬರಿ ಪ್ರಕಾರದಲ್ಲಿ ಹೆಚ್ಚು ಒಲವು. ಇದುವರೆಗೂ ಬರೆದ ಕಾದಂಬರಿಗಳು ಸುಮಾರು60. ಅವುಗಳು ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. (ತರಂಗ, ಸುಧಾ, ಕರ್ಮವೀರ, ಮಂಗಳ, ಕನ್ನಡಪ್ರಭ, ಉದಯವಾಣಿ, ಇತ್ಯಾದಿ) ವಿವಿಧ ಪ್ರಕಾಶನ ಸಂಸ್ಥೆಗಳಿಂದ ಪ್ರಕಟವಾದ ಕಾದಂಬರಿಗಳು ಮರುಮುದ್ರಣವೂ ಒಳಗಂಡು 58 ಪುಸ್ತಕಗಳಾಗಿವೆ. ಕಾಗದದ ಹೂ, ಪುತ್ರಿ ಕಾಮೇಷ್ಟಿ , ಅಜ್ಞಾತ ಮತ್ತು ಇತ್ತೀಚಿನ ಪದರುಗಳು ಕೆಲವು ಜನಪ್ರಿಯ ಕಾದಂಬರಿಗಳು. ಸ್ವೀಕಾರ ಕಾದಂಬರಿ ಸಂಸ್ಕೃತ ಭಾಷೆಗೆ ಅನುವಾದವಾಗಿ ಸಂಭಾಷಣಾ ಸಂದೇಶ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿದೆ. ಕನ್ನಡ ಮಕ್ಕಳ ಚಲನಚಿತ್ರ“ಅಪ್ಸರಧಾರ” ಗೆ ಸಂಭಾಷಣೆಯನ್ನು ಬರೆದಿದ್ದಾರೆ. ಇವರ ಫೇರಿಟೇಲ್‍ ಕತೆ ಚಲನಚಿತ್ರವಾಗಿದೆ. ಕಿರುಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಕೆಲವು ಕತೆಗಳು ಬೇರೆ ಭಾಷೆಗೆ ಅನುವಾದಗೊಂಡಿವೆ. ತಂದೆ : ನಾಗೇಶ್‍ ಕಾಮತ್ ತಾಯಿ : ವಿಜಯಲಕ್ಷ್ಮಿ ಕಾಮತ್ ಜನ್ಮ ದಿನಾಂಕ. : 21 - 01 - 1976 ವಾಸ : ಮಂಗಳೂರು ವಿದ್ಯಾರ್ಹತೆ : ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪದವಿ. ಪ್ರಶಸ್ತಿ [೧]: ಕನ್ನಡ ಸಾಹಿತ್ಯ ಪರಿಷತ್ತುಯುವ ಸಾಹಿತಿಗಳಿಗೆ ಏರ್ಪಡಿಸಿದ್ದ ದತ್ತಿನಿಧಿ ಪುಸ್ತಕ ಸ್ಪರ್ಧೆಯಲ್ಲಿ ‘ಬೇಟೆ’ ಕಾದಂಬರಿಗೆ 2010 ನೇ ಸಾಲಿನ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಸಾಹಿತ್ಯ ಪ್ರಶಸ್ತಿ’ದೊರಕಿದೆ. ದೂರದಾರಿಯತೀರ ಕಾದಂಬರಿಗೆ ಲೇಖಿಕಾಶ್ರೀ ಪ್ರಶಸ್ತಿ. ಕಾಂತಾವರ ಕನ್ನಡ ಸಂಘದ ಕಾದಂಬರಿ ಸಾಹಿತ್ಯ ಪ್ರಶಸ್ತಿ 2023, ಇನ್ನಿತರ ಸಮ್ಮಾನಗಳು, ಬಹುಮಾನಗಳು ದೊರೆತಿವೆ. ಕಾದಂಬರಿಗಳು ಮತ್ತು ಪ್ರಕಟಿತ ಪತ್ರಿಕೆಗಳು ತರಂಗ 1) ಯಾವ ಮೋಹನ ಮುರಳಿ ಕರೆಯಿತೋ (2001) 2) ಆವಂತಿಕಾ (2006) 3) ಸುಪ್ತಸ್ವರ( 2011) 4) ವ್ಯತಿರಿಕ್ತ (2022) ಸುಧಾ 1) ಅತಿಕ್ರಮಣ 2) ನೆಲಮುಗಿಲು (2012) 3) ಸ್ವೀಕಾರ ( 2017) 4) ಅಜ್ಞಾತ (2020) 5) ಪದರುಗಳು (2023) ಮಂಗಳ 1) ಅಂಕಿತಾ (2003) 2) ಕಾಗದದ ಹೂ (2005) 3) ಅನಾವರಣ ( 2007) 4) ಅನುಬಂಧ (2005 ದೀಪಾವಳಿ ವಿಶೇಷಾಂಕ) 6) ದೂರದಾರಿಯತೀರ (2009) 7) ಮರಳಿನ ಮನೆ( 2013) 8) ಪುತ್ರಿ ಕಾಮೇಷ್ಟಿ (2017) [೨] ಕರ್ಮವೀರ 1) ಸಿಕ್ಕು (2001) 2) ಋತುಗಾನ (2003) 3) ಆಸರೆ( 2005) 4) ಮಹಾನದಿ (2009) ಕನ್ನಡ ಪ್ರಭ 1) ಪುನರಪಿ ಜನನಂ (2000) 2) ಒಲವೇ ಜೀವನ (2001) 3) ಸೂತ್ರದ ಗೊಂಬೆ( 2002) 4) ಮುಖಾಮುಖಿ (2003) ಉದಯವಾಣಿ 1) ಎಲ್ಲಿಜಾರಿತೋ ಮನವೂ (1999) 2) ಶ್ರೀಗಂಧ (2003) ಮಲ್ಲಿಗೆ 1) ಕವನಾ (ಮೇ 1996) 2) ಬಂಧನ (ಫೆಬ್ರುವರಿ 1997) 3) ಜೀವನಗಂಗೋತ್ರಿ ( 2000) ಹಂಸರಾಗ 1) ಬೇರು ಬಳ್ಳಿ (ಅಕ್ಟೋಬರ್2005) 2) ಶಬರಿ (ಜನವರಿ 2000) 3) ಬಿರುಕು (ಜನವರಿ2008) 4) ಒಂದು ಸಾವಿನ ಸುತ್ತ (ಮಾರ್ಚ್2006) 5) ಅಲೋಕ (ಸಪ್ಟೆಂಬರ್2006) 6) ಇದುಯಾರುಬರೆದಕಥೆಯೋ (ಮಾರ್ಚ್2007) 7) ಜಾಲ (ಜೂನ್2007) 8) ಮೈತ್ರಿ (ಫೆಬ್ರವರಿ 2010) ವಾರಪತ್ರಿಕೆ 1) ಉಪಾಸನಾ (1998) 2) ಒಲವಿನ ರಾಗ (2001) ಮಂಜುವಾಣಿ 1) ಬೇರು (ಅಕ್ಟೋಬರ್ 2010) ವಿಜಯವಾಣಿ 1) ರುದ್ರವೀಣೆ (ಅಕ್ಟೋಬರ್2012) ಪ್ರಿಯಾಂಕ 1) ಹೊಸ ಬಾಳ ಹೊಸ್ತಿಲು (2009) ರಾಗಸಂಗಮ 1) ಹೂವು ಮುಳ್ಳು (ಜೂನ್1998) 2) ಬಣ್ಣದಚಿತ್ತಾರ (ಜೂನ್1999) 3) ಸುಳಿ (ಜೂನ್2000) 4) ನಿಶೆಯಿಂದ ಉಷೆಗೆ (ಮಾರ್ಚ್2001) 5) ಮಧುರ ಬಾಂಧವ್ಯ(ಏಪ್ರಿಲ್2001) 6) ನೆನಪಿನಂಗಳದಲ್ಲಿ ನೂರುಚಿತ್ತಾರ (ನವೆಂಬರ್2001) 7) ಸಂಸಾರದಲ್ಲಿ ಸಾರ (2002) 8) ಹಂಗು (ಜನವರಿ2003) 9) ಕರುಣಾಮಯಿ (ಮೇ-ಜೂನ್2004) 10) ಸಂಕೀರ್ತನ( ಏಪ್ರಿಲ್2005) 11) ಇರುವುದೆಲ್ಲವ ಬಿಟ್ಟು (ಮೇ 2005) 12) ಅಮಾನುಷ (ಜೂನ್2007) 13) ತೀರ ( ಸಪ್ಟೆಂಬರ್2005) ನವರಾಗಸಂಗಮ 1) ಸಾಫಲ್ಯ (ಡಿಸೆಂಬರ್2000) 2) ನೀ ನಡೆವ ಹಾದಿಯಲ್ಲಿ(ಜುಲೈ2000) 3) ಪಲ್ಲವಿ (ಏಪ್ರಿಲ್2002) 4) ಭಾವ ಬದುಕು (ಜನವರಿ2006) 5) ಕವಲೊಡೆದ ಹಾದಿ (ಸಪ್ಟೆಂಬರ್2006) 6) ಸುಲಗ್ನಾ ಸಾವಧಾನ( ಜನವರಿ2007 ಥ್ರಿಲ್ ಪತ್ರಿಕೆ 1) ಹೈಜಾಕ್ (ಅಕ್ಟೋಬರ್2001) ಚಿಕ್ಕಮಗಳೂರು ಜಿಲ್ಲೆ ಪತ್ರಿಕೆ 1) ಮೇಘಮಾಧುರಿ ಸಖಿ ಪಾಕ್ಷಿಕ 1) ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ.. (ಅಕ್ಟೋಬರ್2015)